ಕನ್ನಡದ ವಿಚಾರದಲ್ಲಿ ಎದ್ದಿರುವ ಈ ವಿವಾದ ಸದ್ಯಕ್ಕೆ ತಣ್ಣಗೆ ಆಗುವಂತೆ ಕಾಣುತ್ತಿಲ್ಲ. ಎಂಇಎಸ್ ನಡೆಯನ್ನು ಖಂಡಿಸಿ ಕನ್ನಡದ ಪರವಾಗಿ ಸಾಕಷ್ಟು ಜನ ಧ್ವನಿ ಎತ್ತಿದ್ದಾರೆ. ಆದರೆ ಸ್ಯಾಂಡಲ್ವುಡ್ನ ಟಾಪ್ ಸ್ಟಾರ್ ನಟರಾದ ಯಶ್ ಮತ್ತು ಸುದೀಪ್ ಮಾತ್ರ ಮೌನ ವಹಿಸಿದ್ದಾರೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಯಶ್, ಸುದೀಪ್ ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ನಾಡು, ನುಡಿಗೆ ಸಮಸ್ಯೆ ಆದಾಗ ನೀವು ಎಲ್ಲಿ ಹೋಗಿದ್ದೀರಿ? ಬಾವುಟ ಸುಟ್ಟಿದ್ದರ ಬಗ್ಗೆ ನೀವು ಯಾಕೆ ಮಾತನಾಡುತ್ತಿಲ್ಲ? ಎಂದು ಪ್ರಶ್ನಿಸುತ್ತಿದ್ದಾರೆ
Where Are You Yash And Sudeep: Kannadigas Question For Heros in MES issue